ಸಂಜೆ ತಲುಪಿದೆ ಕೇಳು
ಕತ್ತಲಪ್ಪುವ ವೇಳೆ
ಎಚ್ಚೆತ್ತು ನೋಡು
ಮರಳಿ ಮಣ್ಣಿನೆಡೆಗೆ.
ಹಿರಿತನದ ಬಾಳ್ಬಿಟ್ಟು
ಸಿರಿಯನದ ಕೂಡಿಟ್ಟು
ಜಗವ ಕೊಳ್ಳುವ ಭರದಿ
ಹೀಗೋಡಿದ್ದೇಕೆ.
ಹಳ್ಳಿಯಲ್ಲೇನಿದೆ ಮಣ್ಣು
ಹೀಗಳೆದು ಹೋದದ್ದು ನೀನು.
ರೈತನೇ ದೇಶದ ಕಣ್ಣು
ಎಂಬುದ ಮರೆತೆಯೇನು?
ಮೊಗ್ಗರಳುವುದ ಕಾಣು
ನಗರದಲ್ಲೇನಿದೆ ಮಂಕೆ?
ಸೂರ್ಯಾಸ್ತದಲ್ಲಿರಬೇಡ
ನಡೆ ಉದಯದೆಡೆಗೆ.
ಅನ್ನದಾತನ ನಾಡು
ವಿಶ್ವಮಾನವರ ಬೀಡು
ಹಳ್ಳಿಯೆಡೆ ಸಾಗೋಣ,
ನಡೆ ಗೆಳೆಯ ಮಣ್ಣಿಗೆ,
ಮರಳಿ ಮಣ್ಣಿಗೆ.
-ವಿಶ್ವನಾಥ್.ಡಿ.ಎ
ಕತ್ತಲಪ್ಪುವ ವೇಳೆ
ಎಚ್ಚೆತ್ತು ನೋಡು
ಮರಳಿ ಮಣ್ಣಿನೆಡೆಗೆ.
ಹಿರಿತನದ ಬಾಳ್ಬಿಟ್ಟು
ಸಿರಿಯನದ ಕೂಡಿಟ್ಟು
ಜಗವ ಕೊಳ್ಳುವ ಭರದಿ
ಹೀಗೋಡಿದ್ದೇಕೆ.
ಹಳ್ಳಿಯಲ್ಲೇನಿದೆ ಮಣ್ಣು
ಹೀಗಳೆದು ಹೋದದ್ದು ನೀನು.
ರೈತನೇ ದೇಶದ ಕಣ್ಣು
ಎಂಬುದ ಮರೆತೆಯೇನು?
ಮೊಗ್ಗರಳುವುದ ಕಾಣು
ನಗರದಲ್ಲೇನಿದೆ ಮಂಕೆ?
ಸೂರ್ಯಾಸ್ತದಲ್ಲಿರಬೇಡ
ನಡೆ ಉದಯದೆಡೆಗೆ.
ಅನ್ನದಾತನ ನಾಡು
ವಿಶ್ವಮಾನವರ ಬೀಡು
ಹಳ್ಳಿಯೆಡೆ ಸಾಗೋಣ,
ನಡೆ ಗೆಳೆಯ ಮಣ್ಣಿಗೆ,
ಮರಳಿ ಮಣ್ಣಿಗೆ.
-ವಿಶ್ವನಾಥ್.ಡಿ.ಎ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ