ಬುಧವಾರ, ಜುಲೈ 11, 2012

ಎಲ್ಲರಲ್ಲೊಂದು ತಾರೆ

ಮುಗಿಲ ತೆರೆಯಲೊಂದು ತಾರೆ
ಶಕ್ತಿ ಮೀರಿ ಮಿನುಗುತಿದೆ.
ಬಾನಿನೆಲ್ಲ ದಿಗಂತಕ್ಕೆ
ವ್ಯಾಪಿಸಲದು ಕಾದಿದೆ.

ಒಂಟಿ ತಾನು, ತುಂಬ ಕ್ಷುದ್ರ
ಎಂಬ ದುಃಖ ಅದಕಿದೆ.
ಆದರೂ ಕೂಡ ಯಾವ ಚಿಂತೆಗೂ
ತಲೆಗೊಡದೇ ನಡೆದಿದೆ.

ಸೂರ್ಯ ಚಂದ್ರರೆಂಬ ದೈತ್ಯರು
ಮರೆ ಮಾಡುವ ಭಯವಿದೆ.
ಚಿಕ್ಕ ಅವಕಾಶವೂ ಬಿಡದೆ
ಪ್ರಯತ್ನ ಮುಂದುವರೆಸಿದೆ.

ನೋಡಿದ ಕಣ್ಣು ಸಾವಿರ ವರುಷ
ಮರೆಯಲಾಗದಂಥ ದಿನ.
ಬಂದೇ ಬರುವುದೊಂದು ದಿನ
ಕಾಯುವೆ ಅಂಥ ದಿನಕೆ ದಿನ.
                     
           -ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ