ಬುಧವಾರ, ಜುಲೈ 11, 2012

ಸೂರ್ಯ

ಮೂಡಣದಿ ಹುಟ್ಟಿ
ಕತ್ತಲೆಯ ಮೆಟ್ಟಿ
ತಾವರೆಗಳ ಅರಳಿಸುತ
ಬರುವನಾ ಸೂರ್ಯ.

ಮನಸಿನಾ ಕನಸಿನಾ
ರಾತ್ರಿಯನು ಕರಗಿಸುತ
ಭರವಸೆಯ ಹೊಂಗಿರಣವ
ತರುವನಾ ಸೂರ್ಯ.

ಭೂಮಿಯಾ ಒಡಲಿಗೆ
ರೈತನಾ ದುಡಿಮೆಗೆ
ಶಕ್ತಿಯಾ ನೀಡುತ್ತ
ಇರುವನಾ ಸೂರ್ಯ.

ಸಾಧನೆಗೆ ಸ್ಫೂರ್ತಿ
ಚಿಂತನೆಗೆ ಭರ್ತಿ
ಸರಕನ್ನು ನೀಡುತ್ತ
ಸರಿವನಾ ಸೂರ್ಯ.

ಪಡುವಣಕೆ ಸರಿಯುತ್ತ
ಮತ್ತೆ ಕನಸನ್ನುಹೊತ್ತಿಸುತ್ತ
ಚಂದ್ರ ತಾರೆಯರ ಕೊಡುಗೆ
ನೀಡಿ ಹೋಗುವನಾತ

ವಿಶ್ವನಾಥ್.ಡಿ.ಎ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ