ಎನಿತು ಹೇಳಲಿ ಎನ್ನ,
ಮನದ ಕಾಂಕ್ಷೆಗಳನ್ನ,
ಒಲವ ತೋಟದ ಹೂ ಚನ್ನೆ.
ಅರಳಿರುವೆ ಮನದನ್ನೆ,
ಮಾತೀಗ ಬರಿ ಸೊನ್ನೆ,
ಹೇಗೆ ಹೇಳಲಿ ಎನ್ನ ಹೇಮಕನ್ನೆ.
ನೋಡು ಬಾನಿನ ಅಂಚು,
ಬೆಳ್ಳಿ ಮೋಡದ ಸಂಚು,
ಅದುವೆ ಎನ್ನ ತೆರೆದಂಚೆ.
ಏಳು ಬಣ್ಣದ ಬಿಲ್ಲು,
ಮಳೆಯ ಆಲಿಕಲ್ಲು,
ಎನ್ನ ಭಾವವೆ ಎಲ್ಲೆಲ್ಲು.
ನೀನಿರದ ನೋಟಗಳು,
ನೊಂದಿಹವು ಕಣ್ಣುಗಳು,
ಬೇಸರವೆ ನಿದಿರೆ ಕನಸುಗಳು.
ಬದುಕು ಕನಸಾಗಿಸದೆ,
ಕನಸು ಬರಿದಾಗಿಸದೆ,
ಬಾರೆಯ ಎನ್ನ ಕಣ್ಣ ಮುಂದೆ.
ವಿಶ್ವನಾಥ್
ಮನದ ಕಾಂಕ್ಷೆಗಳನ್ನ,
ಒಲವ ತೋಟದ ಹೂ ಚನ್ನೆ.
ಅರಳಿರುವೆ ಮನದನ್ನೆ,
ಮಾತೀಗ ಬರಿ ಸೊನ್ನೆ,
ಹೇಗೆ ಹೇಳಲಿ ಎನ್ನ ಹೇಮಕನ್ನೆ.
ನೋಡು ಬಾನಿನ ಅಂಚು,
ಬೆಳ್ಳಿ ಮೋಡದ ಸಂಚು,
ಅದುವೆ ಎನ್ನ ತೆರೆದಂಚೆ.
ಏಳು ಬಣ್ಣದ ಬಿಲ್ಲು,
ಮಳೆಯ ಆಲಿಕಲ್ಲು,
ಎನ್ನ ಭಾವವೆ ಎಲ್ಲೆಲ್ಲು.
ನೀನಿರದ ನೋಟಗಳು,
ನೊಂದಿಹವು ಕಣ್ಣುಗಳು,
ಬೇಸರವೆ ನಿದಿರೆ ಕನಸುಗಳು.
ಬದುಕು ಕನಸಾಗಿಸದೆ,
ಕನಸು ಬರಿದಾಗಿಸದೆ,
ಬಾರೆಯ ಎನ್ನ ಕಣ್ಣ ಮುಂದೆ.
ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ