ಮನದ ಕವಿತೆಯ ಹಾಡು
ಹುಡುಕಿ ಹೊರಟೆನು ನಾನು
ಅಗಾಧ ಕಲ್ಪನಾಲೋಕವನು
ಸೆರೆ ಹಿಡಿಯಲು ಹೊರಟೆ ನಾನು.
ಏನಿಹುದು ಏನಿಲ್ಲ
ಇಲ್ಲವೆಂಬುದೊಂದಿಲ್ಲ
ಉಳಿದಿದ್ದೆಲ್ಲಾ ಮೂರ್ತ ರೂಪ
ತಾಳಿದೆ ಇಲ್ಲೆಲ್ಲಾ.
ಚಂದ ಮಾಮನ ಬಣ್ಣ
ನಾ ಆಗಿಹೆನಣ್ಣ
ಕಣ್ಣಿಗೆ ಕಾಣುವವರಲ್ಲೆಲ್ಲಾ
ಇದ್ದವನು ನಾನೇ ಸಣ್ಣ.
ಹೇಳುವವರ್ ಕೇಳುವವರ್
ಇಲ್ಲದೇನಿಲ್ಲ ಇಲ್ಲಿ
ಹೇಳುವವನ್ ನಾನು
ಕೇಳುವವರೆಲ್ಲರೂ.
ಇಲ್ಲ ಲೆಕ್ಕದ ಗೋಳು
ಇಲ್ಲ ಮೇಷ್ಟರ ಬೆತ್ತ
ಪ್ರತಿದಿನವು ರಜೆಯಿಲ್ಲಿ
ಕಲ್ಪನೆಯ ಶಾಲೆಯಲ್ಲಿ.
ಇದ್ದಕ್ಕಿದ್ದಂತೆಯೇ ತಟ್ಟಿದರು ಯಾರೋ
'ಬೆಳಗಾಯಿತೆದ್ದು ಬಾರೋ
ಕರಿ ಮೂತಿ ಠೊಣಪನೇ
ಶಾಲೆಗೆ ಹೊತ್ತಾಯ್ತು ಬೇಗ ಬಾರೋ'.
ಆಗಲೇ ಗೊತ್ತಾದದ್ದು
ಕನಸು ಅದು ಕಂಡದ್ದು
ಕನಸಿನಲ್ಲಿ ಎದ್ದ ಹಾಡು
ಕಲ್ಪನೆಗೇ ಮರಳಿತು ದೌಡು ದೌಡು ||
ವಿಶ್ವನಾಥ್.ಡಿ.ಎ.
ಹುಡುಕಿ ಹೊರಟೆನು ನಾನು
ಅಗಾಧ ಕಲ್ಪನಾಲೋಕವನು
ಸೆರೆ ಹಿಡಿಯಲು ಹೊರಟೆ ನಾನು.
ಏನಿಹುದು ಏನಿಲ್ಲ
ಇಲ್ಲವೆಂಬುದೊಂದಿಲ್ಲ
ಉಳಿದಿದ್ದೆಲ್ಲಾ ಮೂರ್ತ ರೂಪ
ತಾಳಿದೆ ಇಲ್ಲೆಲ್ಲಾ.
ಚಂದ ಮಾಮನ ಬಣ್ಣ
ನಾ ಆಗಿಹೆನಣ್ಣ
ಕಣ್ಣಿಗೆ ಕಾಣುವವರಲ್ಲೆಲ್ಲಾ
ಇದ್ದವನು ನಾನೇ ಸಣ್ಣ.
ಹೇಳುವವರ್ ಕೇಳುವವರ್
ಇಲ್ಲದೇನಿಲ್ಲ ಇಲ್ಲಿ
ಹೇಳುವವನ್ ನಾನು
ಕೇಳುವವರೆಲ್ಲರೂ.
ಇಲ್ಲ ಲೆಕ್ಕದ ಗೋಳು
ಇಲ್ಲ ಮೇಷ್ಟರ ಬೆತ್ತ
ಪ್ರತಿದಿನವು ರಜೆಯಿಲ್ಲಿ
ಕಲ್ಪನೆಯ ಶಾಲೆಯಲ್ಲಿ.
ಇದ್ದಕ್ಕಿದ್ದಂತೆಯೇ ತಟ್ಟಿದರು ಯಾರೋ
'ಬೆಳಗಾಯಿತೆದ್ದು ಬಾರೋ
ಕರಿ ಮೂತಿ ಠೊಣಪನೇ
ಶಾಲೆಗೆ ಹೊತ್ತಾಯ್ತು ಬೇಗ ಬಾರೋ'.
ಆಗಲೇ ಗೊತ್ತಾದದ್ದು
ಕನಸು ಅದು ಕಂಡದ್ದು
ಕನಸಿನಲ್ಲಿ ಎದ್ದ ಹಾಡು
ಕಲ್ಪನೆಗೇ ಮರಳಿತು ದೌಡು ದೌಡು ||
ವಿಶ್ವನಾಥ್.ಡಿ.ಎ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ