ಬುಧವಾರ, ಜುಲೈ 11, 2012

ಪ್ರವಾಹ

ಹತ್ತಿ ಉರಿವ ಧರೆಯ ಮೇಲೆ,
ಕುಣಿಯಿತೊಂದು ವರ್ಷ ಧಾರೆ,
ಭುವಿಗೇ ಮೋಡ ಉಕ್ಕಿ ಹರಿದು,
ಬಿಡದೆ ಒಂದೂ ಜಾಗ ಬರಿದು.
ಧಗೆಯು ಕರಗಿ ಹೋಗುದಿಂದು,
ಬಿತ್ತಿದ ಬೀಜ ಮೊಳೆವುದಿಂದು,
ಎಂದೆನುತಲಿ ನಲಿದ ಜನರು,
ಕಳೆದರಿರುಳ ಕ್ಷಣದ ಸರಳು.
ಬೆಳಗಾಗಲು ತಲೆಯ ಮೇಲೆ,
ಕಣ್‌ಹನಿಸಿತು ಮುಖದ ಮೇಲೆ,
ನೀರಲಿ ಹುಡುಕಿ ನೆಲದ ಜಾಡು,
ಇಲ್ಲದೆ ತಲೆಯ ಮೇಲೊಂದು ಮಾಡು.

ಊರು ಇಲ್ಲ, ಕೇರಿ ಇಲ್ಲ,
ಅಳಿದುಳಿದದು ಊರೇ ಅಲ್ಲ.
ಮಂದಿರ ಮಸೀದಿ ಒಂದೆ ಎಲ್ಲ,
ಒಂದೇ ಚೌಕ, ಸ್ಮಶಾನವೆಲ್ಲ.
ಹರಿಯಿತಾಗ ಸ್ನೇಹ ಹಸ್ತ,
ಸಹಾಯ ಹಸ್ತ, ಅಭಯ ಹಸ್ತ,
ನಾವು ನೀವು ಒಂದೇ ಎಲ್ಲ,
ಬನ್ನಿ ಬಾಳ್ವ ಒಟ್ಟು ಎಲ್ಲ.
ಎಂದೆನುತಲಿ ಮಿಡಿದವಾಗ,
ಕಂಬನಿಗಳ ಕಡಲ್ಗಳಿಗೆ,
ಹೆಮ್ಮೆಯಿಂದ ತಾಯೆ ಕನ್ನಡ
ಹೆತ್ತ ಕನ್ನಡಿಗರ್ ಹೃದಯವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ