ಬುಧವಾರ, ಜುಲೈ 11, 2012

ಮೌನ ವಲಸೆ

ಎಲ್ಲಿ ಹೋದವು ಶುಕಗಳು?
ಎಲ್ಲಿ ಹೋದವು ಗುಬ್ಬಚ್ಚಿಗಳು?
ಕಣ್ಣಿಗೆ ಕಾಣದಷ್ಟು,ಕಿವಿಗೆ ಕೇಳದಷ್ಟು
ದೂರ ಹೋದವು ಏಕೆ ಪಾರಿವಾಳಗಳು?

ಚಂದಗೆ ಮೈದುಂಬಿ,ಪುಟ್ಟ ಕಣ್ಮಿಟುಕಿಸುತ
ಕಾಳು ಕದಿಯುತ್ತಿದ್ದ ಅಳಿಲುಗಳೆಲ್ಲಿ?
ಚಿನ್ನದಾ ಬೆಳಕಲ್ಲಿ, ಮೈತುಂಬ ನೀಲಿಹೊದ್ದು
ಮೀನು ಹಿಡಿಯುತ್ತಿದ್ದ ಆ ಮಿಂಚುಳ್ಳಿಗಳೆಲ್ಲಿ?

ಹೋದವು ಕಣ್ಣಿನಿಂದಾಚೆ,
ಹೋದವು ಬಾನಿನಿಂದಾಚೆ,
ಹುಡುಕುತ್ತ ನೆಲೆಯನ್ನು,
ಗೂಡು ಕಟ್ಟುವ ಕನಸನ್ನೂ.

ಏನು ಉಳಿದಿದೆ ಇಂದು?
ಬರಿಯ ಮಣ್ಣಿನ ಕಂದು.
ಹಾಳು ಹಂದಿಯ ಹಿಂಡು,
ಬೀಡಾಡಿ ದನಗಳು ದಂಡು ದಂಡು.

ಏಕೆ ಬರಬಾರದೆ ಮತ್ತೆ ಅವು?
ಹೇಗೆ ಬಂದಾವು,ಬರೀ ಕಾಂಕ್ರೀಟ್ನ ಕಾವು.
ಹೂವು ಹುಡುಕುವುದೆಲ್ಲಿ,ಕಾಳು ಕದಿಯುವುದೆಲ್ಲಿ?
ಮರಗಳೇ ಸುಮ್ಮನೆ ನಡೆದಾಗ, ಇವುಗಳ ಮಾತೆಲ್ಲಿ, ಇವುಗಳ ಮಾತೆಲ್ಲಿ?

ವಿಶ್ವನಾಥ್.ಡಿ.ಎ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ