ಬುಧವಾರ, ಜುಲೈ 11, 2012

ಒಮ್ಮೆ ನಕ್ಕುಬಿಡು...


ಒಮ್ಮೆ ನಕ್ಕುಬಿಡು,
 
ಮನದ ಭಾರ ಕಳೆದು,
ನಾಳೆ ಮತ್ತೆ ಹೊಸ
ಬೆಳಕು ಮೂಡುವ
ಕನಸ ಕಟ್ಟಿ ನಡೆದು.


ಭರವಸೆಯ ಮೂಡಿಸು,
ಬತ್ತಿ ಹೋದ ಕಣ್ಣಲ್ಲಿ,
ಆಸೆಯ ಅರಳಿಸು,
ಮುದುಡಿದಾ ಬದುಕಲ್ಲಿ,
ನಿಂತ ಜಗಕೆ, ಜಗದಾ ಜಡತೆಗೆ
ಚಲನೆಯ ಮರಳಿಸು.


ಹಸಿವನು ಹೊತ್ತಿಸು,
ಜ್ಞಾನದ ಎಡೆಯಲ್ಲಿ,
ಕ್ರಾಂತಿಯ ಮೊಳಗಿಸು,
ಬೆಳವಣಿಗೆಯ ದಿಕ್ಕಿನಲ್ಲಿ,
ಹೂತ ಹೆಜ್ಜೆಗಳಿಗೊಂದು ಗಟ್ಟಿ
ನೆಲವನ್ನು ಕೊಟ್ಟು ನಡೆಸು.

- ವಿಶ್ವನಾಥ್.ಡಿ.ಎ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ